ಯಾಕೆ ಮೂಕನಾದ್ಯೋ ಗುರುವೇ ನೀ |||
।। ಯಾಕೆ ಮೂಕನಾದ್ಯೋ।।
ಯಾಕೆ ಮೂಕನಾದಿ ಲೋಕಪಾಲಕ ಎನ್ನ
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ
|| ಯಾಕೆ ಮೂಕನಾದ್ಯೋ ||
ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ
ಮಂದಿಯೊಳಗೆನ್ನ ಮಂದನ್ನ ಮಾಡಿದೀಗ |
ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ
ಕಾಕುಜನರೊಳೆನ್ನ ನೂಕಿಬಿಟ್ಟು ನೀನು |
|| ಯಾಕೆ ಮೂಕನಾದ್ಯೊ ||
ಹೀಗೆ ಪಾಲಿಸಿದರೆ ಯೋಗಿಕುಲವರ್ಯ
ರಾಘವೇಂದ್ರನೆ ಭವ ಸಾಗುವದ್ಹ್ಯಾಂಗಯ್ಯ ||
ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ
ಘನ್ನಮಹಿಮನು ನೀ ಎನ್ನನು ಬಿಟ್ಟೀಗ ||
|| ಯಾಕೆ ಮೂಕನಾದ್ಯೋ ||
ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ||
ಘನ್ನಮಹಿಮನು ನೀ ಎನ್ನನು ಬಿಟ್ಟೀಗ |
ಜನನಿಯು ನೀ ಎನಗೆ, ಎನ್ನ ಜನಕನಯ್ಯ
ಮನ್ನಿಸೊ ನೀ ನಿತ್ಯಾನನ್ಯ ಶರಣನಯ್ಯ ||
|| ಯಾಕೆ ಮೂಕನಾದ್ಯೋ ||
ಎಂದಿಗಾದರೂ ನಿನ್ನ ಹೊಂದಿಕೊಂಡವನಲ್ಲೊ
ಇಂದು ನೀ ಬಿಟ್ಟರೆನ್ನ ಮುಂದೆ ಕಾಯುವರಾರೋ |
ನಾಥನು ನೀ ಅನಾಥನು ನಾನಯ್ಯ ||
ಪಾತಕರರಿ ಜಗನ್ನಾಥವಿಠಲ ದೂತ ||
|| ಯಾಕೆ ಮೂಕನಾದ್ಯೋ ||
***