ಎನ್ನ ಕಂದಾ ಹಳ್ಳಿಯ ಹನುಮ
ಚೆನ್ನಾಗಿ ಇಹರೇ ಲಕ್ಷ್ಮಣದೇವರು ||
|| ಪ ||
ತುಪ್ಪ ಪಂಚಾಂಮೃತವಂದು
ಅಡವಿ ಗಡ್ಡೆಗಳಿಂದು ||
ಕರ್ಪೂರ ವೀಳ್ಯವಂದು
ಕರುಕು ಇಂದು ||
ಸುಪ್ಪತ್ತಿಗೆ ಮಂಚವಂದು
ಹುಲ್ಲಹಾಸಿಗೆ ಇಂದು ||
ಶ್ರೀಪತಿ ರಾಘವ ಕ್ಷೇಮದಲ್ಲೈದಾರೆ||
|| ಎನ್ನ ಕಂದಾ ||
ನವವಸ್ತ್ರಗಳು ಅಂದು
ನಾರಸೀರೆಗಳಿಂದು ||
ಹೂವಿನಗಂಟು ಅಂದು
ಜಡೆಗಳಿಂದು||
ಜವಾಜಿ ಕಸ್ತೂರಿ ಅಂದು
ಭಸಿತಧೂಳಿ ಇಂದು||
ಶ್ರೀವರ ರಾಘವ ಕ್ಷೇಮದಲ್ಲೈದಾರೆ ||
|| ಎನ್ನ ಕಂದಾ ||
ಕನಕ ರಥಗಳಂದು
ಕಾಲುನಡಿಗೆ ಇಂದು ||
ಘನಸತ್ತಿಗೆಯು ಅಂದು
ಬಿಸಿಲು ಇಂದು ||
ಸನಕಾದಿಗಳೋಲೈಪ ಆದಿಕೇಶವ ನಮ್ಮ
ಹನುಮೇಶ ರಾಘವ ಕ್ಷೇಮದಲ್ಲೈದಾರೆ ||
|| ಎನ್ನ ಕಂದಾ ||