ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ ||

ಕರೆಯುವರು ಅವನನ್ನೇ ಮಂಜುನಾಥ ||

|| ಪ ||

ಧರ್ಮದ ಮರ್ಮವಿಹ ಈ ನೆಲ ||

ಕನ್ನಡದ ಹಿರಿಮೆಯ ಧರ್ಮಸ್ಥಳ||

|| ಕಾಶಿಯಿಂದ ಬಂದನಿಲ್ಲಿ ||

ನೇತ್ರಾವತಿ ಬಂದಳು ಮಾಯೆಯಾಗಿ 

ದೇವಗಂಗೆಯಂತೆಯೇ ಪಾವನೆಯಾಗಿ ||

ಅಣ್ಣಪ್ಪ ಬಂದನಿಲ್ಲಿ ಸೇವೆಗಾಗಿ

ಭೂತ ಪ್ರೇತ ಸೇನೆಗೆ ನಾಥನಾಗಿ ||

|| ಕಾಶಿಯಿಂದ ಬಂದನಿಲ್ಲಿ ||

ಹಿಂದು ಜೈನ ಧರ್ಮದ ಸಂಗಮವಿಲ್ಲಿ

ಎಂದು ಸಾರುತಿಹನು ಬಾಹುಬಲಿ ||

ಇಂತ ಪುಣ್ಯ ಕ್ಷೇತ್ರಕೆ ಸಾಟಿಯೆಲ್ಲಿ 

ಯಾತ್ರಿಕನೆ ಧನ್ಯನಾಗಿ ನಲಿ ನಲಿ ||

|| ಕಾಶಿಯಿಂದ ಬಂದನಿಲ್ಲಿ ||