ಶಂಕರ ಶಶಿಧರ ಗಜ ಚರ್ಮಾಂಬರ ಗಂಗಾಧರ ಹರನೇ

ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ || 

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||

ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ

 ಶೂಲಿ ಕಪರ್ದಿ  ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ ||

ಜಯ ಮೃತ್ಯುಂಜಯನೇ ||

ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ

ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ ||

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ

ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ ||

ಕರುಣಾಸಾಗರನೇ ||

ಶಂಕರ ಶಶಿಧರ ಗಜ ಚರ್ಮಾಂಬರ ಗಂಗಾಧರ ಹರನೇ

ಸುಂದರ ಸ್ಮರಹರ ಗೌರಿ ಮನೋಹರ ಜಯ ಪರಮೇಶ್ವರನೇ ||

ಜಯ ಜಯ ಶಂಕರನೇ ಜಯ ವಿಶ್ವೇಶ್ವರನೇ ||