ಕದ್ರಿಯ ಕೊಳದಿಂದ  ಜ್ಯೋತಿರ್ಲಿಂಗ ರೂಪದಿಂದ 

ಅಣ್ಣಪ್ಪನ ಹೆಗಲೇರಿದ ಮಂಜುನಾಥ 

ದರುಶನವ ನೀಡಯ್ಯಾ ಧರ್ಮದಾತ ||

ಮಂಜುನಾಥ ಸ್ವಾಮಿ ಮಂಜುನಾಥ ||ಪ ||

ಅಣ್ಣಪ್ಪನು ನಿಂತಿಹನು ರಕ್ಷಣೆಗಾಗಿ 

ಅನ್ನದಾನ ನಿತ್ಯವೂ ಭಕ್ತರಿಗಾಗಿ ||

ಅನುದಿನ ನಿನ್ನನು ಭಜಿಸುವೆ ತಲೆಬಾಗಿ 

ಅನ್ನಬ್ರಹ್ಮನೇ ಬಾರೋ ವರವಾಗಿ ||

||ಕದ್ರಿಯ ಕೊಳದಿಂದ ||

ಮಾತುಬಿಡಾ ಮಹಾ ಮಹಿಮ ಮಂಜುನಾಥ 

ಕಾಶಿಯಿಂದ ಬಂದ ಪರಮ ವಿಶ್ವನಾಥ ||

ಸೋಮವಾರ ಮಹಾಪೂಜೆ ನಿನಗೆ ಅರ್ಪಣೆ 

ಶಿವರಾತ್ರಿ ಉತ್ಸವದೀ ಬಿಲ್ವಾರ್ಚನೆ || 

||ಕದ್ರಿಯ ಕೊಳದಿಂದ ||

***