ಚಿಂತ್ಯಾಕೆ ಮಾಡುತಿದ್ದಿ ಭೈರವನಿದ್ದಾನೆ
ಭೈರವನಿದ್ದಾನೆ
ನಿನ್ನ ಚಿಂತೆಯ ಬಿಡಿಸೋ ಗೌರಿಕಾಂತನಿದ್ದಾನೆ
ಗೌರಿಕಾಂತನಿದ್ದಾನೆ||
||ಚಿಂತ್ಯಾಕೆ||
ಎಳ್ಳು ಕೊನೆಯೂ ಮುಳ್ಳು ಮೊನೆಯು
ಎಲ್ಲಾ ಬಿಡದೆ ಒಳಗೆ ಹೊರಗೆ ||
ಎಲ್ಲಾ ಠಾವಿನಲ್ಲೂ ಗೌರಿವಲ್ಲಭನಿದ್ದಾನೆ
ಗೌರಿವಲ್ಲಭನಿದ್ದಾನೆ||
||ಚಿಂತ್ಯಾಕೆ||
ಹಿಂದೆ ನಿನ್ನ ಸಲಹಿದರ್ಯಾರೋ
ಮುಂದೆ ನಿನ್ನ ಸಲಹುವರ್ಯಾರೋ ||
ಅಂದಿಂದೆಂದಿಗೂ ನಂದಿವಾಹನನಿದ್ದಾನೆ
ನಂದಿವಾಹನನಿದ್ದಾನೆ||
||ಚಿಂತ್ಯಾಕೆ||
ನಾನು ನೀನು ಎಂಬ ಉಭಯ
ಹೀನಗುಣಗಳೆಲ್ಲಾ ಕಳೆದೂ||
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ
ಸುಖ ಸಂಪೂರ್ಣನಿದ್ದಾನೆ|| `
||ಚಿಂತ್ಯಾಕೆ||
ಗೌರಿಕಾಂತನಿದ್ದಾನೆ
ಗೌರಿವಲ್ಲಭನಿದ್ದಾನೆ
ನಂದಿವಾಹನನಿದ್ದಾನೆ
ಸುಖ ಸಂಪೂರ್ಣನಿದ್ದಾನೆ
ಸ್ವಾಮಿ ಭೈರವನಿದ್ದಾನೆ ||