ಚಿಂತ್ಯಾಕೆ ಮಾಡುತಿದ್ದಿ ಭೈರವನಿದ್ದಾನೆ 

ಭೈರವನಿದ್ದಾನೆ 

ನಿನ್ನ ಚಿಂತೆಯ ಬಿಡಿಸೋ  ಗೌರಿಕಾಂತನಿದ್ದಾನೆ 

ಗೌರಿಕಾಂತನಿದ್ದಾನೆ|| 

||ಚಿಂತ್ಯಾಕೆ||

ಎಳ್ಳು ಕೊನೆಯೂ ಮುಳ್ಳು ಮೊನೆಯು 

ಎಲ್ಲಾ ಬಿಡದೆ ಒಳಗೆ ಹೊರಗೆ ||

ಎಲ್ಲಾ ಠಾವಿನಲ್ಲೂ ಗೌರಿವಲ್ಲಭನಿದ್ದಾನೆ

ಗೌರಿವಲ್ಲಭನಿದ್ದಾನೆ||

||ಚಿಂತ್ಯಾಕೆ||

ಹಿಂದೆ ನಿನ್ನ ಸಲಹಿದರ್ಯಾರೋ 

ಮುಂದೆ ನಿನ್ನ ಸಲಹುವರ್ಯಾರೋ ||

ಅಂದಿಂದೆಂದಿಗೂ ನಂದಿವಾಹನನಿದ್ದಾನೆ

ನಂದಿವಾಹನನಿದ್ದಾನೆ||

||ಚಿಂತ್ಯಾಕೆ||

ನಾನು ನೀನು ಎಂಬ ಉಭಯ 

ಹೀನಗುಣಗಳೆಲ್ಲಾ ಕಳೆದೂ||

ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ 

 ಸುಖ ಸಂಪೂರ್ಣನಿದ್ದಾನೆ|| `

||ಚಿಂತ್ಯಾಕೆ||

ಗೌರಿಕಾಂತನಿದ್ದಾನೆ

ಗೌರಿವಲ್ಲಭನಿದ್ದಾನೆ

ನಂದಿವಾಹನನಿದ್ದಾನೆ

ಸುಖ ಸಂಪೂರ್ಣನಿದ್ದಾನೆ

ಸ್ವಾಮಿ ಭೈರವನಿದ್ದಾನೆ ||