ರಾಮ ಗೋವಿಂದ ಹರೇ ಕೃಷ್ಣ ಗೋವಿಂದ

ದಾಮೋದರ ಹರಿ ವಿಷ್ಣು ಮುಕುಂದ 

 || ಪ ||

ಮಚ್ಚವತಾರದೊಳಾಡಿದನೆ

ಮಂದರಾಚಲವ ಬೆನ್ನೊಳು ಆಂತವನೆ

ಅಚ್ಚಸೂಕರನಾಗಿ ಬಾಳಿದನೆ

ಮದ ಹೆಚ್ಚಿ ಹಿರಣ್ಯನ ಸೀಳಿದನೆ ||

|| ರಾಮ ಗೋವಿಂದ ||

ಬಲಿಯೊಳು ದಾನವ ಬೇಡಿದನೆ

ಕ್ಷಾತ್ರ ಕುಲವ ಬಿಡದೆ ಕ್ಷಯ ಮಾಡಿದನೆ

ಜಲನಿಧಿಗೆ ಬಿಲ್ಲ ಹೂಡಿದನೆ

ಕಾಮಗೊಲಿದು ಗೊಲ್ಲತಿಯೋಳ್ ಆಡಿದನೆ ||

|| ರಾಮ ಗೋವಿಂದ ||

ಸಾಧಿಸಿ ತ್ರಿಪುರರ ಗೆಲಿದವನೆ

ಪ್ರತಿವಾದಿಸಿ ಹಯವೇರಿ ನಲಿದವನೆ

ಭೇದಿಸಿ ವಿಶ್ವವ ಗೆಲಿದವನೆ

ಬಡದಾದಿ ಕೇಶವರಾಯ ನಮಗೆ ಒಲಿದವನೆ ||

|| ರಾಮ ಗೋವಿಂದ ||


***