ಕದ್ರಿಯಿಂದ ಬಂದವನು ಮಂಜುನಾಥನು 

ಧರ್ಮಸ್ಥಳ ಕ್ಷೇತ್ರದಲ್ಲಿ ಅನ್ನದಾತನು 

ಇವನು ಅನ್ನದಾತನು  

||ಪ||

ಧರ್ಮದ ರಕ್ಷಣೆ ಮಾಡುತ ನಿಂತನು ಅಣ್ಣಪ್ಪನು 

ಕ್ಷೇತ್ರದ ವೈಭವ ನೋಡುತ ನಿಂತನು ಗೊಮ್ಮಟೇಶನು|| 

||ಕದ್ರಿಯಿಂದ ||

ಪರಶುರಾಮ ಕ್ಷೇತ್ರದಲ್ಲಿ ಮಾತ್ರವಲ್ಲದೇ 

ಈ ಪರಶಿವನು ಮೆರೆದಿಹನು ಸರ್ವ ಕ್ಷೇತ್ರದಿ ||

ಮಾತನು ಬಿಡನು ಶ್ರೀ ಮಂಜುನಾಥನು 

ಹರಕೆ ಹೊತ್ತು ಸೇವೆ ಮಾಡಿ ಮಹಾಮಹಿಮನ ||

 || ಧರ್ಮದ ರಕ್ಷಣೆ ||

ಆಣೆಮಾತು ‌ಪರಿಹಾರ ಮಾತ್ರವಲ್ಲದೇ 

ಹೆಗ್ಗಡೆಯ ಮಾತಿನಲ್ಲಿ ದಿವ್ಯಶಕ್ತಿಯು ||

ಅನ್ನ ನೀಡಿದಾ ವಸ್ತ್ರ ಕೊಡಿಸಿದ 

ವಿದ್ಯೆಯನು ಕರುಣಿಸುತ ಬುದ್ದಿ ನೀಡಿದ  || 

|| ಧರ್ಮದ ರಕ್ಷಣೆ ||

***