ಕೈ ಮುಗಿವೆ ಮದವೂರ ಗಣನಾಥನೇ 

ಹೃದಯಾ ಸಚೇತಕ ವರದಾತನೇ ||ಪ ||

ಮಧುವಾಹಿನಿ ನದಿ ತೀರದಿ ಶೋಭಿಸುವವನೇ

ಮೊದಲೊಂದಿಸಿ ನಿನ ಪಾದಕೆ ತಲೆಬಾಗುವೆನಯ್ಯ ||

ದಯೆತೋರು ದೇವಾ ಗಣೇಶ || 

||ಕೈ ಮುಗಿವೆ ||

ಎಲ್ಲಾ ವಿಘ್ನವ ಹೋಮಕುಂಡದಿ 

ಆಹುತಿ ಮಾಡಿ ನೀ ನಿಗ್ರಹಿಸೋ||

ಸಿದ್ಧಿ ಮಾಡಿ ಸಕಲ ಶುಭಕಾರ್ಯಗಳ 

ಗಣಗಳ ಒಡೆಯನೆ ಅನುಗ್ರಹಿಸೋ || 

||ಕೈ ಮುಗಿವೆ ||

ಜ್ಞಾನ ವೃದ್ಧಿಯನು ಮಾಡೋ 

ಜ್ಞಾನ ಸಿದ್ಧಿಯನು ನೀಡೋ||

ಸಿದ್ದಿವಿನಾಯಕ  ಬುದ್ದಿ ಪ್ರದಾಯಕಾ 

ಶಂಕರ ತನಯನೆ ದಯೆತೋರೋ || 

||ಕೈ ಮುಗಿವೆ ||

ಅಹೋರಾತ್ರಿ ಮನದಲ್ಲಿ ನಿನ್ನ ನಾಮ 

ತುಂಬಿರಲಿ ಅನುಕ್ಷಣ ನಿನ್ನ ನೇಮ ||

ಭಾವರಾಗ ಉಸಿರಲ್ಲಿ ಭಕ್ತಿಯ ಹೋಮ 

ಧನ್ಯತೆಯ ಮೂಡಿಸಲಿ ನಿನ್ನ ಪ್ರೇಮ || 

||ಕೈ ಮುಗಿವೆ ||

***