ಚಿಂತೆ ಏಕೆ ಮನವೇ
ಗುರು ರಾಘವೇಂದ್ರನಿರಲು ||
ಚಿಂತೆ ಕಳೆದು ನಿಶ್ಚಿಂತೆಯಿಂದ ||
ಇರುವಂತೆ ಮಾಡುವ ಚಿಂತಾಮಣಿಯಿರೆ |
|| ಚಿಂತೆ ಏಕೆ ಮನವೇ ||
ಭೀತಿ ಏಕೆ ಮನವೇ
ಗುರುರಾಯ ಬಳಿಯಲ್ಲಿ ಇರಲು ||
ಭೀತಿ ಕಳೆದು ನಿರ್ಭೀತಿಯಿಂದ ||
ಇರುವಂತೆ ಮಾಡುವ ಗುರುರಾಯನಿರಲು |
|| ಚಿಂತೆ ಏಕೆ ಮನವೇ ||
ದುಃಖವೇತಕೆ ಮನವೇ
ಸದ್ಗುರು ನಾಮ ನಿನ್ನಲ್ಲಿರಲು||
ದುಃಖ ಕಳೆದು ಸುಖ ನೀಡಲೆಂದೇ ||
ಗುರು ಸಾರ್ವಭೌಮನು ಇರುವಾಗ ನಿನಗೆ |
|| ಚಿಂತೆ ಏಕೆ ಮನವೇ ||
ಮುಳುಗಬೇಡ ಮನವೇ
ಆಸೆಯ ಕಡಲಲ್ಲಿ ನೀನು ||
ತಾವರೆ ಎಲೆಯು ಜಲರಾಶಿಯಲ್ಲಿ ||
ಇರುವಂತೆ ನೀನಿರೆ ಗುರುರಾಯ ಮೆಚ್ಚುವ |
|| ಚಿಂತೆ ಏಕೆ ಮನವೇ ||
***