|| ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ 

ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ||

ಯಾರಿಗೆ ದೂರುವೆನೋ ಹೇ ಶ್ರೀನಿವಾಸ 

ಯಾರೆನ್ನ ಸಲಹುವರೋ || ಪ ||

ಸಾರಿದ ಭಕ್ತ ಸಂಸಾರಿ ನಿನ್ನಯ ಪಾದ 

ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ || 

|| ಯಾರಿಗೆ ದೂರುವೆನೋ  ||

ಕಷ್ಟ ಜನುಮಕೆ ಬಂದೆನೋ ಧಾರುಣಿಯೊಳು

ದುಷ್ಠರಿಂದಲಿ ನೊಂದೆನೋ ||

ನಿಷ್ಟುರ ಬೇಡವೋ ನಿನ್ನ ನಂಬಿದ ಮೇಲೆ

ಸೃಷ್ಟಿಗೊಡೆಯ ಎನ್ನ ಬಿಟ್ಟು ಸಲಹಬೇಡಾ||

|| ಯಾರಿಗೆ ದೂರುವೆನೊ ||

ಹಿಂದೆ ಮಾಡಿದ ಕರ್ಮವೋ 

ಈ ಭವದೊಳು  ಮುಂದಾಗಿ ತೋರುತಿದೆ ||

ಇಂದೇನು ಗತಿ ಅದರಿಂದ ನೊಂದೆನೊ ನಾನು ||

ಮಂಧರದರ ಗೋವಿಂದಾ ನೀನಲ್ಲದೇ||

|| ಯಾರಿಗೆ ದೂರುವೆನೋ  ||

ಹಲವು ಪರಿಯ ಕಷ್ಟವ ನಿನ್ನ ಪಾದ 

ಜಲಜದ ಕರುಣದಲಿ ||

ಸುಲಿಗೆಗೊಟ್ಟೆನೋ ನಾನು ಸೂರೆಗಾರರಿಗೆಲ್ಲ ||

ಒಲವಾಗು ಎನ್ನೊಳು ಪುರಂದರ ವಿಠ್ಠಲ ||

|| ಯಾರಿಗೆ ದೂರುವೆನೋ ||