ಉದಿಸುವುದೆಂದು ಶ್ರೀಮಲೆ ಮೇಲೆ ತೇಜೋನಕ್ಷತ್ರ
(ಸ್ವಾಮಿಯೇ ಶರಣಂ )
ಬರುತಿದೆ ನೋಡು ಅರಸುತ ನಿನ್ನ ಭಕ್ತರಹೋ ಯಾತ್ರ
(ಅಯ್ಯಪ್ಪ ಶರಣಂ) ||
ನಮಗಿಹುದೊಂದೇ ನಿನ್ನಾಶ್ರಯವು ಸರಿಸದಿರು ಮಾತ್ರ ||
|| ಉದಿಸುವುದೆಂದು ||
ಕಲಿಯುಗ ವರದ ಬ್ರಹ್ಮಚಾರಿ ಬರುವೆವು ನಿನ್ನೆಡೆಗೆ ||
ಕಲಿಯುಗ ಪೂರ್ತಿ ಕರಿಮಲೆ ಮೇಲೆ ಸೇರಿಸಿಕೋ ಬಳಿಗೆ ||
ಪಾದವ ಬಿಡೆವು ಬೇರೆಡೆ ಇರೆವು||
ಭಕ್ತ ಜನ ಪ್ರಿಯನೇ |
|| ಉದಿಸುವುದೆಂದು ||
ಇರುಮುಡಿಯೊಂದೇ ತಂದೆವು ತಂದೇ ನಿಯಮಗಳ ಮಾಡಿ|| ಕರುಣಾಮಯನೇ ನಿನ್ನನು ಕಾಣಲು ನಡೆದೂ ನಿನ್ನೆಡೆಗೆ ||
ಹರಿಹರ ನಂದನ ಭಕ್ತರ ಚೇತನ ||
ಸೇರಿಸು ಶ್ರೀ ಮಲೆಗೆ |
|| ಉದಿಸುವುದೆಂದು ||