ಚಿಂತೆ ಏಕೆ ಮನವೇ
ಗುರು ರಾಘವೇಂದ್ರನಿರಲು ||
ಚಿಂತೆ ಕಳೆದು ನಿಶ್ಚಿಂತೆಯಿಂದ
ಇರುವಂತೆ ಮಾಡುವ ಚಿಂತಾಮಣಿಯಿರೆ||
|| ಚಿಂತೆ ಏಕೆ ಮನವೇ ||
ಭೀತಿ ಏಕೆ ಮನವೇ
ಗುರುರಾಯ ಬಳಿಯಲ್ಲಿ ಇರಲು |
ಭೀತಿ ಕಳೆದು ನಿರ್ಭೀತಿಯಿಂದ
ಇರುವಂತೆ ಮಾಡುವ ಗುರುರಾಯನಿರಲು ||
|| ಚಿಂತೆ ಏಕೆ ಮನವೇ ||
ದುಃಖವೇತಕೆ ಮನವೇ
ಸದ್ಗುರು ನಾಮ ನಿನ್ನಲ್ಲಿರಲು||
ದುಃಖ ಕಳೆದು ಸುಖ ನೀಡಲೆಂದೇ
ಗುರು ಸಾರ್ವಭೌಮ ಇರುವಾಗ ನಿನಗೆ||
|| ಚಿಂತೆ ಏಕೆ ಮನವೇ ||
ಮುಳುಗಬೇಡ ಮನವೇ
ಆಸೆಯ ಕಡಲಲ್ಲಿ ನೀನು ||
ತಾವರೆ ಎಲೆಯು ಜಲರಾಶಿಯಲ್ಲಿ
ಇರುವಂತೆ ನೀನಿರೆ ಗುರುರಾಯ ಮೆಚ್ಚುವ ||
|| ಚಿಂತೆ ಏಕೆ ಮನವೇ ||
***