ದೇವರ ಪರವಾಗಿ ದೀನರ ವರವಾಗಿ ||

ಬಂದ ಭೂಮಿಗೆ ಸುಬ್ರಹ್ಮಣ್ಯ

ದೈತ್ಯ ಹರನಾಗಿ ||

 || ದೇವರ ||

ಶಂಕರ ಸುತನಿವನು

ಓಂಕಾರಮಯನಿವನು ||

ನಾಗವಂಶದ ರಕ್ಷೆಗಾಗಿ ನಾಗನಾದವನು||

 || ದೇವರ ||

ತೆಪ್ಪದ ಉತ್ಸವದಿ

ಒಪ್ಪಾಗಿ ಮೆರೆದವನು ||

ಚಂಪಾಷಷ್ಠಿಯ ತೇರಿನಲ್ಲಿ

ಸೊಂಪಾಗಿ ಕುಳಿತವನು ||

|| ದೇವರ ||

ಮನದಲ್ಲಿ ನೆನೆದವರ

ಮನೆಯನ್ನು ಬೆಳಗುವನು ||

ಹೊತ್ತ ಹರಕೆಯ ನೀಡುವವರ

ಚಿತ್ತವ ತಣಿಸುವನು ||

|| ದೇವರ ||

ನವಿಲ ಮೇಲೇರಿ ನಲಿಯುತ್ತ ಕುಳಿತವನು ||

ಕುಕ್ಕೆ ಕ್ಷೇತ್ರದ ಸುಬ್ರಹ್ಮಣ್ಯನೆ

ಭಕ್ತರಕ್ಷಕನು ||

|| ದೇವರ ||


***